ಹೆಬ್ರಿ : ಮಗಳಿಗೆ ಮೊದಲಿನಿಂದಲೂ ಕಲಿಯಲು ತುಂಬಾ ಆಸಕ್ತಿ, ಅವಳ ಕಲಿಕೆ ಬೇಕಾಗ ಎಲ್ಲಾ ವ್ಯವಸ್ಥೆ, ಪೂರಕವಾದ ವಾತಾವರಣವನ್ನು ನಾವು ಕಲ್ಪಿಸಿಕೊಟ್ಟಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿ ವಿಶೇಷ ಸಾಧನೆ ಮಾಡಿದ್ದಾಳೆ. ನನಗೆ ಅತ್ಯಂತ ಖುಷಿಯಾಗಿದೆ, ಮಾತಿನಲ್ಲಿ ಸಂಭ್ರಮವನ್ನು ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿನಿ ರಾಯಿಸ ತಾಯಿ ರುಕ್ಸಾನ ಮಾಧ್ಯಮದೊಂದಿಗೆ ಸೋಮವಾರ ಸಂಭ್ರಮ ಹಂಚಿಕೊಂಡರು.

ನಮ್ಮ ಮನೆ ಪೆರ್ಡೂರಿನ ಪುತ್ತಿಗೆಯಲ್ಲಿದೆ, ಮಗಳ ಶಿಕ್ಷಣದ ಹೆಚ್ಚಿನ ಅನುಕೂಲತೆಗಾಗಿ ಹೆಬ್ರಿಯಲ್ಲೇ ಬಾಡಿಗೆ ಮನೆ ಮಾಡಿಕೊಂಡು ಇದ್ದೇವೆ. ಕಷ್ಟಪಟ್ಟು ಓದಿ ಮಾಡಿದ ಸಾಧನೆ ಖುಷಿಯಾಗಿದೆ. ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಸಪ್ನಾ ಶೆಟ್ಟಿಯವರ ಮಾರ್ಗದರ್ಶನ, ಉಪನ್ಯಾಸಕರು, ಆಡಳಿತ ಮಂಡಳಿ ಮತ್ತು ಆಕೆಯ ಸಹಪಾಠಿಗಳ ಪ್ರೋತ್ಸಾಹ ಸಹಕಾರದಿಂದ ಮಗಳ ಸಾಧನೆಯಾಗಿದೆ. ಶ್ರಮಕ್ಕೆ ಫಲ ಸಿಕ್ಕಿದ ಪ್ರತಿಫಲ ಸಿಕ್ಕಿದೆ ಎಂದು ರುಕ್ಸಾನ ಹರ್ಷ ವ್ಯಕ್ತಪಡಿಸಿದರು.

ತಮಾಶೆ ಮಾಡಬೇಡಿ ಎಂದೆ  ಇಂದು ತರಗತಿಗೆ ಬಂದು ಸಹಪಾಠಿಗಳೆಲ್ಲ ಫಲಿತಾಂಶಕ್ಕಾಗಿ ಕಾದು ಕುಳಿತ್ತಿದ್ದೇವು, ಅಷ್ಟೋತ್ತಿಗೆ ವಿದ್ಯಾರ್ಥಿಯೊಬ್ಬರು ಓಡಿ ಬಂದು, ರಾಯಿಸ ಕಂಗ್ರಟ್ಸ್ ಎಂದರು. ನಾನು ತಮಾಶೆ ಮಾಡಬೇಡಿ ಎಂದೆ, ಕೂಡಲೇ ಪ್ರಿನ್ಸಿಪಾಲ್, ಉಪನ್ಯಾಸಕರು, ಅಧ್ಯಕ್ಷರಾದ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ಸಪ್ನಾ ಮೇಡಮ್ ಬಂದಿ ರಾಜ್ಯಕ್ಕೆ 3ನೇ ಸ್ಥಾನ ಬಂದದ್ದು ತಿಳಿಸಿ ಅಭಿನಂದಿಸಿದರು. ತುಂಬಾ ಖುಷಿಯಾಗಿದೆ ಎಂದು ವಿಧ್ಯಾರ್ಥಿನಿ ರಾಯಿಸ ಸಂಭ್ರಮ ಹಂಚಿಕೊಂಡರು.

ನನ್ನ ಸಾಧನೆಗೆ ನನ್ನ ತಂದೆ ತಾಯಿ ಅಣ್ಣ ಮತ್ತು ಕುಟುಂಬದ ಅತೀ ಹೆಚ್ಚಿನ ಪ್ರೋತ್ಸಾಹ ಪ್ರಮುಖ ಕಾರಣ ಎಂದು ರಾಯಿಸ ಕಾಲೇಜಿನ ಉಪನ್ಯಾಸಕರು, ಪ್ರಾಂಶುಪಾಲರು, ವಿಧ್ಯಾರ್ಥಿ ಮಿತ್ರರು ಮತ್ತು ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ಮಾರ್ಗದರ್ಶನವನ್ನು ಸ್ಮರಿಸಿದರು. ಸ್ಫರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ನೋಡಿಕೊಂಡು ಶಿಕ್ಷಣದ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ ಎಂದು ರಾಯಿಸ ಹೇಳಿದರು. ರಾಯಿಸ ಉಡುಪಿ ಜಿಲ್ಲೆ ಪೆರ್ಡೂರು ಪುತ್ತಿಗೆಯವರಾದ ಎ. ಉಮರಬ್ಬ ಮತ್ತು ರುಕ್ಸಾನ ದಂಪತಿಗಳ ಪುತ್ರಿ. ವ್ಯಾಪಾರ ಮಾಡಿಕೊಂಡಿರುವ ಇವರಿಗೆ ಗ್ರಾಫಿಕ್ಸ್ ಡಿಸೈನರ್ ಆಗಿರುವ ಒಬ್ಬ ಗಂಡು ಮಗ ಮತ್ತು ರಾಯಿಸ ಸೇರಿ ಇಬ್ಬರು ಮಕ್ಕಳು.

ಪಿಯುಸಿ ಪರೀಕ್ಷೆಯಲ್ಲಿ ರಾಯಿಸ 600ರಲ್ಲಿ 592 ಅಂಕ ಪಡೆದು ರಾಜ್ಯಮಟ್ಟಕ್ಕೆ 3ನೇ ಸ್ಥಾನ ಪಡೆದಿದ್ದಾರೆ. ಆಂಗ್ಲ ಭಾಷೆಯಲ್ಲಿ 99, ಹಿಂದಿ 99, ಫಿಸಿಕ್ಸ್ 98, ಕೆಮಿಸ್ಟ್ರಿ 100, ಮೆಥಮೆಟಿಕ್ಸ್ 99, ಬಯೋಲಜಿಯಲ್ಲಿ 100 ಅಂಕ ಪಡೆದಿದ್ದಾರೆ.