ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ದೈಹಿಕ ಶಿಕ್ಷಣ ವಿಭಾಗ “ಸಾಂಕ್ರಾಮಿಕದಿಂದ ರಕ್ಷಣೆ ಪಡೆಯಲು ಬೇಕಾದ ಫಿಟ್‌ನೆಸ್‌” ಎಂಬ ವಿಷಯದ ಬಗ್ಗೆ ಜುಲೈ 24 (ಶುಕ್ರವಾರ) ರಂದು ಬೆಳಗ್ಗೆ 10.30 ಕ್ಕೆ ರಾಷ್ಟ್ರೀಯ ಮಟ್ಟದ ವೆಬಿನಾರ್‌ ಆಯೋಜಿಸಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಜೆರಾಲ್ಡ್‌ ಸಂತೋಷ್‌ ಡಿʼಸೋಜ, ಕುವೆಂಪು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಎಸ್‌.ಎಂ ಪ್ರಕಾಶ್‌ ಮತ್ತು ಬೆಂಗಳೂರಿನ ಸ್ಟೋರ್ಟ್ಸ್‌ ಅಥಾರಿಟಿ ಆಫ್‌ ಇಂಡಿಯಾದ (SAI) ಹಿರಿಯ ಖೋ ಖೋ ಮತ್ತು ಕಬಡ್ಡಿ ತರಬೇತುದಾರ ಸತ್ಯ ಕುಮಾರ್‌ ಎಂ.ಕೆ ಭಾಗವಹಿಸಲಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಮತ್ತು ವೆಬಿನಾರ್‌ನ ಸಂಘಟನಾ ಕಾರ್ಯದರ್ಶಿ ಡಾ. ಕೇಶವ ಮೂರ್ತಿ ಟಿ (9448325724) ಅವರನ್ನು ಸಂಪರ್ಕಿಸಬಹುದು.