ಜೇನು ಗಡ್ಡದಾರಿಯಾಗಿ ನಂದನ್ ಕುಮಾರ್ ಪೆರ್ನಾಜೆ
ಜೇನು ತುಪ್ಪ ಎಂದರೆ ತುಂಬಾ ಪ್ರೀತಿ. ಜೇನುತುಪ್ಪವನ್ನು ಎತ್ತಿಕೊಂಡು ನೆಕ್ಕುವುದು (ಸವಿ) ಬಲು ರುಚಿ. ಜೇನುಗೂಡಿನಂತೆ ಸಿಹಿಯಾಗಿರಲು ಹೌದು..! ಇದು ಗಡ್ಡದ ವಿಷಯ ಹರೆಯಕ್ಕೆ ಬಂದಾಗ ಸಹಜವಾಗಿ ಫಲವತ್ತಾದ ಮೊಗದಲ್ಲಿ ಹುಲುಸಾಗಿ ಬೆಳೆಯುವ ಹುಲ್ಲುಗಳೆಂಬ ಈ ಕೂದಲಿಗೆ ಅದೇನೋ ಪ್ರಚಾರಪ್ರಿಯತೆ ಗೊತ್ತಿಲ್ಲ. ಪ್ರತಿದಿನ ಗಡ್ಡ ತೆಗೆದರೆ ರಸಿಕನಾದರೆ, ತೆಗೆಯದಿದ್ದರೆ ಸನ್ಯಾಸಿ, ಹಲವರು ಇದರ ಬಗ್ಗೆ ನಯವಾಗಿ ಪ್ರತಿಭಟಿಸುವವರೆ. ಇಲ್ಲಿ ನನ್ನ ದೇಹಕ್ಕೆ ಚುಚ್ಚುವುದಲ್ಲ ಹಲವರ ಕಣ್ಣುಗಳಿಗೆ ಚುಚ್ಚುವುದು ಸಾಮಾಜಿಕ ನೆಲೆಯಲ್ಲಿ ಪ್ರಮುಖವಾದ ಈ ಗಡ್ಡ ಸದ್ಯ ಸಂಸ್ಕಾರ ಎನ್ನುವ ಸಮಾಜದಲ್ಲಿ ಕುಹಕವಾಗಿ ಆಡಿಕೊಳ್ಳುತ್ತಾರೆ ಅಂತ ಈ ಗಡ್ಡದಲ್ಲಿಯೂ ಹಲವು ವಿಧಗಳಿವೆ.
ಗಡ್ಡ ನೇವರಿಸುವುದು ಸ್ವ ಪ್ರೀತಿಯ ಲಕ್ಷಣ, ಯೋಚಿಸುವ ಸಂಕೇತ ಇನ್ನೂ ಏನೆಲ್ಲಾ ಅರ್ಥೈಸಬಹುದು. ಕವಿ ಹೃದಯವನ್ನು ಚಿತ್ರಿಸುತ್ತದೆ ಬಗಲಲ್ಲೊಂದು ಚೀಲ, ಆದರೆ ಚಂದದ ಗಡ್ಡ ಬೆಳೆಸುವುದು ನೇವರಿಸಿದಷ್ಟೇ ಸುಲಭವಲ್ಲ. ಇದೀಗ ಗಡ್ಡ ಬೆಳೆಸುವುದು ಫ್ಯಾಷನ್ ಆಗಿದೆ. ಇತ್ತೀಚೆಗೆ ಗಡ್ಡ-ಮೀಸೆ ಬಿಡುವುದು ಸಂಕೇತವಾಗಿರಬಹುದು. ಇಷ್ಟು ಉದ್ದದ ಮೀಸೆ ಬಿಟ್ಟು ಅದನ್ನು ಆಗಾಗ ತಿರುವುದು ಖುಷಿಯನ್ನು ನೀಡಬಹುದು ಹಾಗೆ ಗಡ್ಡವನ್ನು ಸದಾ ಸವರುತ್ತಿರುವುದು ಖುಷಿಯನ್ನು ನೀಡಬಹುದು ಆದರೆ ಈ ಚಿತ್ರದಲ್ಲಿರುವ ವರ ಗಡ್ಡವನ್ನು ನೇವರಿಸುವಾಗ ಎಚ್ಚರ ಎಲ್ಲಿಯಾದರೂ ನೋವಾದರೆ ಚುಚ್ಚದೆ ಬಿಡದು ಸವರುವ ಮುನ್ನ ಎಚ್ಚರ!!
ಗಡ್ಡದ ಮೇಲೆ ಎಷ್ಟು ಪ್ರೀತಿ ಎಂಬ ಪ್ರಶ್ನೆಗೆ ಮಧುಕರ ವೃತ್ತಿ ಎನ್ನದು ಬಲು ಚೆನ್ನದು.... ಎಂಬ ದಾಸರಪದ ಪ್ರಸ್ತುತ. ಜೇನುಕೃಷಿ ಬಗ್ಗೆ ಮಧುವಿನ ವೃತ್ತಿ ದೊಡ್ಡದು ಎಂದು ಹೇಳಿದರೆ ತಪ್ಪಾಗಲಾರದು ಯಾಕೆಂದರೆ ರಾಜಕೀಯದಲ್ಲಿ ಏನಾದರೂ ಇರುಸುಮುರುಸು ಉಂಟಾದಾಗಲೇ ಜೇನುಗೂಡಿಗೆ ಕೈ ಹಾಕಿದಂತೆ ಎಂಬ ಎಚ್ಚರಿಕೆಯ ನುಡಿ ಸದಾ ಬರುತ್ತಿರುತ್ತದೆ. ಜೇನ್ನೊಣದ ಗುಣವನ್ನ ಅರಿಯದೆ ಜೇನು ನೊಣಗಳು ಎಂದರೆ ಭಯಪಡುತ್ತಾರೆ . ಕೆಲವರಂತೂ ಜೇನುನೊಣದ ಹತ್ತಿರವೇ ಸುಳಿಯುತ್ತಿಲ್ಲ. ಕೆಲವೊಮ್ಮೆ ನೊಣಗಳು ಬೆವರು ವಾಸನೆಗೆ ಮೇಲೆ ಮೈ ಮೇಲೆ ಬಂದು ಕುಳಿತರೆ, ಕರೆಂಟಿನ ಬೆಳಕಿಗೆ ಬಂದಾಗ ಜೀವವೇ ಹಾರಿ ಹೋದ ಅನುಭವ ಹೊಂದುತ್ತಾರೆ. ಕೆಲವರಂತೂ ಅದರ ಗೂಡಿಗೆ ಬೆಂಕಿ ಇಟ್ಟು ನಾಶ ಮಾಡುವವರು ಇದ್ದಾರೆ. ಚುಚ್ಚುವಿಕೆಯು ಔಷಧಿಯೇ ವಾತ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ. ವಿದೇಶದಲ್ಲಿ ಇದರ ಚಿಕಿತ್ಸೆಯು ನಡೆಯುತ್ತಿದೆ. ಜೇನು ತಿನ್ನಲು ಎಷ್ಟು ರುಚಿಕರವೂ ಹಾಗೆ ಅತಿಯಾದರೆ ಅಮೃತವೂ ವಿಷವಾಗುತ್ತದೆ.
ಜೇನುಗೂಡಿಗೆ ಕೈ ಹಾಕುವಾಗಲೇ ಎಚ್ಚರ ಎನ್ನುವವರು ಯಾವ ರೀತಿ ಜೇನುಗೂಡಿನಿಂದ ಜೇನನ್ನು ಸಂಗ್ರಹಿಸಲು ಕಷ್ಟಕರವೂ, ಸಂಗ್ರಹಿಸಿದ ಜೇನು ಯಾವ ರೀತಿ ಸಿಹಿಯಾಗಿರುತ್ತದೆಯೋ ಹಾಗೆಯೇ ನಮ್ಮಲ್ಲಿ ಸಹನೆ, ತಾಳ್ಮೆ ಇದ್ದರೆ ಜೇನು ಕುಟುಂಬವನ್ನು ಗಲ್ಲದ ತುಂಬಾ ಕುಳ್ಳಿರಿಸಿ ಜೇನು ಗಡ್ಡದಂತೆ ರೂಪಿಸಿ ನೋಡುಗರನ್ನು (ನೈಜ) ಗಡ್ಡದಲ್ಲಿ ಅಚ್ಚರಿ ಕುತೂಹಲಕ್ಕೆ ಪಾತ್ರರಾಗುವಿರಿ. ಹಾಗೆಯೇ ಅಂತಹ ವಿಶೇಷ ಗಡ್ಡ ನಿರೂಪಿಸಿದ ಪುತ್ತೂರು ಸೈಂಟ್ ಫಿಲೋಮಿನಾ ಬಿಕಾಂ ಪದವೀಧರ ಯುವಕ ನಂದನ್ ಕುಮಾರ್ ಪೆರ್ನಾಜೆ ಗಡ್ಡದಲ್ಲಿ ಕುಳ್ಳಿರಿಸಿ ಮನಸ್ಸಿಗೆ ನೆಮ್ಮದಿ ನೀಡುವ ಜೇನುಕೃಷಿ ಹವ್ಯಾಸವಾಗಿ ತೊಡಗಿಸಿ ಕೊಂಡಿದ್ದಾರೆ.
ಜೇನಿನ ಸವಿ ಯಾರಿಗೆ ಇಷ್ಟವಿಲ್ಲ, ಜೇನುಗೂಡು ಸಹ ಆಕರ್ಷಣೀಯವೇ. ಮರದ ಕೊಂಬೆಗೆ ಕಟ್ಟಿದ ಜೇನುಗೂಡನ್ನು ನೋಡುವುದೇ ಚೆಂದ. ಆದರೆ ಗಲ್ಲದಲ್ಲಿ ಜೇನು ಗೂಡು ಕಟ್ಟಿದರೆ ಕಚ್ಚಿದರೆ ಭಯದಿಂದ ಜೇನಿನ ಮಹಲನ್ನು ದೂರದಿಂದಲೇ ವೀಕ್ಷಿಸಿ ಮುಂದಕ್ಕೆ ಹೋಗುವವರೇ ಹೆಚ್ಚು. ಅಂತಹ ಕೆಲವು ಮಂದಿಯರಲ್ಲಿ ನಂದನ್ ಕುಮಾರ್ ಪೆರ್ನಾಜೆ ಚಿಗುರು ಮೀಸೆಯ ಯುವ ಉತ್ಸಾಹಿ ತರುಣ. ಕೃಷಿಯ ಬದುಕು ಮರೆಗೆ ಸರಿಯುತ್ತಿರುವ ಕಾಲಘಟ್ಟದಲ್ಲಿ ನಮ್ಮ ಬದುಕಿನ ಮೂಲವಾದ ಕೃಷಿ, ಹೈನುಗಾರಿಕೆ, ಜೇನುಕೃಷಿಗಳಿಗೆ ನಮ್ಮ ಯುವಜನರು ಮುಖ ಮಾಡುತ್ತಿರುವುದು ನಾವೆಲ್ಲಾ ಸಂತೋಷಪಡಬೇಕಾದ ವಿಷಯ. ಜೇನಿನ ಬದುಕು ನಮಗೆಲ್ಲ ಆದರ್ಶ. ನಮ್ಮ ಬದುಕು ಮಧುರ ಮಧುರವಾಗಿರಬೇಕಾದರೆ ಜೇನು ಕುಟುಂಬದ ಅರಿವು ಮಾಡಿಕೊಳ್ಳಬೇಕು ಜೇನುನೊಣಗಳ ಬದುಕೇ ಒಂದು ವಿಸ್ಮಯ ಸಹಕಾರ, ಒಗ್ಗಟ್ಟು, ಸೇವಾ ಮನೋಭಾವನೆಯನ್ನು ಜೇನು ಕುಟುಂಬವನ್ನು ನೋಡಿ ನಾವು ತಿಳಿದುಕೊಳ್ಳಬಹುದು. ನಮ್ಮ ಹಿರಿಯರ ಕಾಲದಿಂದಲೂ ಖುಷಿ, ಶಾಂತಿ ನೆಮ್ಮದಿಗೆ ಜೇನು ಕೃಷಿಯಿಂದ ಸಿಕ್ಕಿದೆ. ಜೇನುನೊಣಗಳ ಷಟ್ಪದಿ ಜೋಡಣೆ ಪ್ರಕೃತಿ ಅದ್ಭುತಗಳಲ್ಲಿ ಒಂದು. ಒಂದೇ ಬೆಳೆಯನ್ನು ನಂಬಿ ಕೃಷಿ ಮಾಡಿದಲ್ಲಿ ಕೈ ಸುಟ್ಟು ಕೊಳ್ಳಬೇಕಾದ ಸಾಧ್ಯತೆ ಹೆಚ್ಚು. ಆದ್ದರಿಂದಲೇ ಮುಖ್ಯ ಕೃಷಿಯೊಡನೆ ಉಪ ಬೆಳೆಗಳನ್ನು ಬೆಳೆಯಬೇಕು ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ. ಈ ನಿಟ್ಟಿನಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಬಂಡವಾಳ ಹಾಕದೆ ಮಾಡಬಹುದಾದ ಕೃಷಿ ಜೇನು ಕೃಷಿ. ಇಂದು ನೂರಾರು ಎಕರೆ ಹೊಲದಲ್ಲಿ ಕೃಷಿ ಮಾಡುವ ಮಗನ ಹೆಸರು ಹೇಳುವವರಿಲ್ಲ. ಭೂಮಿಗಳು ಬಂಜರು ಇದು ನಮ್ಮ ದುರ್ದೈವ. ಉದ್ಯೋಗಕಾಗಿ ಪಟ್ಟಣ ಸೇರುವವರು ಹೆಚ್ಚು. ಹಾಗೆ ಕೃಷಿ ಜಾಗದಲ್ಲಿ ಕೀಟನಾಶಕಗಳ ಬಳಕೆಯಿಂದ ಜೇನಿನ ಆಹಾರವು ವಿಷಮಯವಾಗಿ ಜೇನುಸಾಕಣೆ ಮಾಡುತ್ತಿದ್ದರು ಪರಾಗಸ್ಪರ್ಶ ಆಗದೆ ಬೆಳೆಗಳು ಹೆಚ್ಚಾಗುವುದಿಲ್ಲ. ಹೀಗೆ ಮುಂದುವರಿದಲ್ಲಿ ಅಪಾಯ ಖಂಡಿತ ಕಟ್ಟಿಟ್ಟಬುತ್ತಿ. ಜೇನು ಅಳಿದರೆ ನಾವು-ನೀವು ಉಳಿಯಬಹುದೆ. ವಿದೇಶದಲ್ಲಿದ್ದಾಗಲೇ ಕೀಟನಾಶಕಗಳ ಬಳಕೆ ಬ್ಯಾನ್ ಆಗಿದೆ. ನಾವು ಇನ್ನಷ್ಟೇ ಎಚ್ಚೆತ್ತುಕೊಳ್ಳಬೇಕಾಗಿದೆ ಪ್ರಕೃತಿದತ್ತವಾಗಿ ನಿಯಂತ್ರಿಸಲು ಅಲ್ಲೊಂದು ಇಲ್ಲೊಂದು ಕಡೆ ಜೇನು ಕೃಷಿಯತ್ತ ವಾಲುತ್ತಾ ಇರುವವರಿಗೆ ಕುಮಾರ್ ಪೆರ್ನಾಜೆ ಯವರಿಗೆ ಜೇನಿನ ಬಗ್ಗೆ ಇರುವ ಮಾಹಿತಿ ಅಗಾಧ. ಅವರ ಮಕ್ಕಳು ಕುಟುಂಬವು ಇದರಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ಜೇನಿನ ಹನಿ ಸವಿಯೋಣ ಸಮೃದ್ಧ ಜೀವನ ಹೊಂದೋಣ.
ಚಿತ್ರ, ಬರಹ : ಸೌಮ್ಯ ಪೆರ್ನಾಜೆ, ಪುತ್ತೂರು